ಹಿಲಿಯಾಣ:ಯಕ್ಷಗಾನ ಕಲಾವಿದರಿಗೆ ಸಮ್ಮಾನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಗುರುವಾರ, ಜನವರಿ 15 , 2015
|
ಜನವರಿ 16, 2015
|
ಹಿಲಿಯಾಣ:ಯಕ್ಷಗಾನ ಕಲಾವಿದರಿಗೆ ಸಮ್ಮಾನ
ಸಿದ್ದಾಪುರ :
ಹಿಲಿಯಾಣ ಶ್ರೀ ಬ್ರಹ್ಮ ಬೈದರ್ಕಳ ಗರೋಡಿಯಲ್ಲಿ ರವಿವಾರ ಜರಗಿದ, ಸಾಸ್ತಾನ ಶ್ರೀ ಗೋಳಿಗರಡಿ ಮೇಳದ ಯಕ್ಷಗಾನ ಬಯಲಾಟದಲ್ಲಿ ಯಕ್ಷಗಾನ ಕಲಾವಿದರಾದ ನಾಗೇಶ ಕುಲಾಲ ನಾಗರಕೊಡ್ಗಿ, ದಿವಾಕರ ಪೂಜಾರಿ ಆವರ್ಸೆ, ಚಂದ್ರ ಕುಲಾಲ ಆವರ್ಸೆ ಅವರಿಗೆ ಕೋಟಿಚೆನ್ನಯ ಗೆಳೆಯರ ಬಳಗದ ವತಿಯಿಂದ ಸಮ್ಮಾನಿಸಲಾಯಿತು.
ಕೋಟ ಶ್ರೀನಿವಾಸ ಪೂಜಾರಿ ಹಾಗೂ ಲಕ್ಷ್ಮಣ ಪೂಜಾರಿ ಅವರು ಸಮ್ಮಾನಿಸಿದರು.
ಈ ಸಂದರ್ಭದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರು ಮುಜರಾಯಿ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ, ಹಿಲಿಯಾಣದ ಗರೋಡಿಗೆ ಸರಕಾರದಿಂದ 10 ಲಕ್ಷ ರೂ. ಅನುದಾನವನ್ನು ನೀಡಿದ್ದರಿಂದ ಅವರನ್ನು ಗರೋಡಿ ವತಿಯಿಂದ ಗರೋಡಿಯ ಅಧ್ಯಕ್ಷ ವೈ. ಕರುಣಾಕರ ಶೆಟ್ಟಿ ಯರುಕೋಣೆ ಅವರು ಸಮ್ಮಾನಿಸಿದರು.
ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಗುಂಡ ನಾಯ್ಕ, ಪ್ರಮೋದ್ ಹೆಗ್ಡೆ, ವಿಜಯ್ ಕುಮಾರ್ ಶೆಟ್ಟಿ ಆವರ್ಸೆ, ಗರೋಡಿಯ ಅರ್ಚಕ ಕರುಣಾಕರ ಪೂಜಾರಿ ಹಾಗೂ ಕೋಟಿ ಚೆನ್ನಯ ಗೆಳೆಯರ ಬಳಗದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.
ಕೃಪೆ :
http://udayavani.com
|
|
|